Tuesday, March 4, 2008

ಕಾಲಕ್ಕಿಂತ ಬೇರೆ ಔಷಧವಿದೆಯೆ?

ನಿಜ, ಕಾಲ್ಪನಿಕಕ್ಕಿಂತ ಅನುಭವ ಕವನಕ್ಕೆ ಹೆಚ್ಚಿನ ಜೀವ ತುಂಬುತ್ತವೆ..
ಯಾವುದೊ ನೋವಿನಲ್ಲಿ ನಾನು ಇನ್ನೆಂದೂ ಎದೆಯಲ್ಲಿ ಹೂವರಳಿಸುವುದಿಲ್ಲ ಎಂದಿದ್ದೆ ನಿಜ.... ಆದರೆ, ಕಾಲಕ್ಕಿಂತ ಬೇರೆ ಔಷಧವಿದೆಯೆ!!? ಅದರ ಡಾಕ್ಟರಿಕೆಯಲ್ಲಿ ಎಲ್ಲ ಗಾಯಗಳು ಮಾಯುತ್ತವೆ!! (ಮುಳ್ಳಿನಿಂದಾದ ಗಾಯದ ಕುರುಹು, ಹೂವಿನ ನೆನಪನ್ನಂತೂ ಮಾಯಲು ಬಿಡುವಿದಿಲ್ಲ!!). ನಾವು ಎಷ್ಟೇ ಪ್ರಯತ್ನಿಸಿ, ಎದೆಯನ್ನು ಬರಡಾಗಿಸಿಟ್ಟರೂ, ತಂಗಾಳಿಯು ಎಲ್ಲಿಂದಲೂ ತಂದ ಬೀಜವನ್ನು,ಸಣ್ಣ ಸೋನೆಮಳೆ,ಮೊಳಕೆ ತರಿಸಿ, ಗಿಡವಾಗಿ ಚಿಗುರಿಸಿ, ನಮಗೆ ಗೊತ್ತಿಲ್ಲದಂತೆ ಪುಟ್ಟ ಹೂವನ್ನು ಅರಳಿಸಿ ಹೋಗುತ್ತದೆ...!! ಇದು ಎಲ್ಲ ಮನುಷ್ಯ ಪ್ರಯತ್ನವನ್ನು ಮೀರಿದ್ದು, ಹಾಗು ಬರಡನ್ನು ಬದುಕಾಗಿಸುವುದೇ ಜಗದ ನಿಯಮ...!! ಅಲ್ಲವೇ!!??

No comments: